ಮುಂಬಯಿ ಕಥೆ-ವ್ಯಥೆ

ಮುಂಬಯಿ ಕಥೆ-ಕಹಾನಿ

ಮುಂಬಯಿ ತನ್ನದೆ ಕಾಸ್ಮೊಪಾಲಿಟಿನ್ ಮನಸ್ಥಿತಿಗೆ, ವೇಗದ ಜೀವನಕ್ಕೆ ಹೆಸರುವಾಸಿ, ಇಂದು ಆ ಮನಸ್ಥಿತಿಗೆ ಭೀತಿ ಮತ್ತು ವೇಗಕ್ಕೆ ತಡೆ ಬಿದ್ದಿದೆ. ಅಲ್ಲಿನ ವಲಸಿಗ ಪರಭಾಷಿಕರು ಈಗ ಮತ್ತೊಂದು ಆತಂಕ ಎದುರಿಸುತ್ತಿದ್ದಾರೆ. ಕನಸುಗಳ  ನಗರಿ ಮತ್ತೊಮ್ಮೆ ಭಾಷಿಕ ಸಮಸ್ಯೆಗಳ ಬೆಂಕಿಗೆ ಸಿಲುಕಿದೆ. ಎಲ್ಲಿಂದಲೋ ಹೊಟ್ಟೆಪಾಡು ಅರಸಿ ಬಂದವರು, ಹೊಟ್ಟೆ ತುಂಬತೊಡಗಿದಂತೆ  ಸ್ಥಳೀಯರೆಡೆಗೆ ತೋರಿದ ನಿರ್ಲಕ್ಷ್ಯ ಈಗ ಅವರನ್ನು ತಿರುಗಿ ಬೀಳುವಂತೆ ಮಾಡಿದೆ.

ಹಾಗೆ ನೋಡಿದರೆ ಮುಂಬಯಿಯಲ್ಲಿ ಈ ರೀತಿ ನೆಡೆಯುತ್ತಿರುವುದು ಇದೇ ಮೊದಲಲ್ಲ. ೧೯೬೦ರಲ್ಲಿ ಶಿವಸೇನೆಯ ಸ್ಥಾಪಕರಾದ ಬಾಳಾಸಾಹೇಬ ಠಾಕ್ರೆ ಇದೇ ರೀತಿಯಲ್ಲಿ ದಕ್ಷಿಣ ಭಾರತಿಯರ ಮೇಲೆ ಯುದ್ಧ ಘೋಷಿಸಿದ್ದರು. ಅದರೆ ಆಗ ಇದ್ದ ಕಾರಣಗಳು ಮತ್ತು ಪರಿಸ್ಥಿತಿಗಳೇ ಬೇರೆ. ಮುಂಬಯಿಯ ಆಗಿನ ಎಲ್ಲ ಖಾಸಗಿ, ಅರೆ-ಖಾಸಗಿ ಉದ್ಯಮಗಳಲ್ಲಿ ದಕ್ಷಿಣ ಭಾರತದ ಉದ್ಯೋಗಿಗಳು ಹೆಚ್ಚುತ್ತಿರುವ ಸಂಖ್ಯೆಗೆ ಹೆದರಿದ, ಅವಕಾಶ ವಂಚಿತ ಮರಾಠಿಗರ ಮುಖವಾಣಿಯಾಗಿ ಅಂದು ಠಾಕರೆ ಘೋಷಿಸಿದ್ದು “ಪುಂಗಿ ಬಜಾವೋ, ಲುಂಗಿ ಭಗಾವೋ” (ಪುಂಗಿ ಊದಿರಿ, ಲುಂಗಿ ಓಡಿಸಿರಿ). ಅಂದು ಮರಾಠಿಗರು ದಕ್ಷಿಣ ಭಾರತಿಯರ ಮೇಲೆ ಮುರಿದುಕೊಂಡು ಬಿದ್ದಿದ್ದರು.

ನಲವತ್ತೆಂಟು ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ ಎರಡೂ ಗುಂಪಿನ ನಡುವೆ ಹಲ್ಲೆಗಳು, ಕೊಲೆಗಳು ನೆಡೆದಿದ್ದವು. ಆ ವೇಳೆಗಾಗಲೇ ಮುಂಬಯಿಯಲ್ಲಿ ತಳವೂರಿದ್ದ ದಕ್ಷಿಣ ಭಾರತೀಯರು ನಂತರದ ದಿನಗಳಲ್ಲಿ ಮನೆಯ ಹೊರಗಡೆ ತಮ್ಮ ಭಾಷೆಗಳನ್ನು ಬಳಸಲು ಹೆದರಲಾರಂಭಿಸಿದ್ದರು. ಈ ಘಟನೆಗಳನ್ನು ಬಲವಾಗಿಟ್ಟುಕೊಂಡು ೧೯೬೬ರಲ್ಲಿ ಹುಟ್ಟಿದ್ದು ಶಿವಸೇನೆ. ಅಂದು ಬಾಳಾ ಠಾಕರೆ ದಕ್ಷಿಣ ಭಾರತೀಯರ ಮೇಲೆ ಪ್ರಯೋಗಿಸಿದ ಅಸ್ತ್ರವನ್ನೇ ಇಂದು ರಾಜ್ ಠಾಕರೆ ಉತ್ತರ ಭಾರತೀಯರ ಮೇಲೆ ತೇಲಿಸಿದ್ದಾರೆ. ಈವತ್ತು ಮುಂಬಯಿಯಲ್ಲಿ ನೆಡೆಯುತ್ತಿರುವ ಘಟನೆಗಳಿಗೆ ರಾಜಕೀಯ ಕಾರಣಗಳಿರಬಹುದು. ಆದರೆ ಇದಕ್ಕೆ ಬಲಿಯಾಗುತ್ತಿರುವುದು ‘ಆಮ್‌ ಆದ್ಮಿ’ ಎಂಬ ಸಾಮಾನ್ಯ ನಾಗರಿಕ.

ಈ ಲೇಖನ “ಕೆಂಡಸಂಪಿಗೆ.ಕಾಂ” ನಲ್ಲಿ ದಿನದ ಸುದ್ದಿ (೦೯/೦೨/೨೦೦೮) ವಿಭಾಗದಲ್ಲಿ ಪ್ರಕಟವಾಗಿದೆ. ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು.

0 Responses to “ಮುಂಬಯಿ ಕಥೆ-ವ್ಯಥೆ”



  1. No Comments Yet

Leave a Reply




a

Blog Stats

  • 8,446 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು