
Blogroll
a
Recent Comments
| sunaath on ನಿಮ್ಮ ನೆನೆಪುಗಳು ಭಾರತವನ್ನು ಇನ್ನ… | |
| Dileep Hegde on ಆ ಗೆಳೆಯನೇ ಬೇರೆ | |
| Sunaath on ಆ ಗೆಳೆಯನೇ ಬೇರೆ | |
| sunaath on ನನ್ನ ಸಧ್ಯದ ಓದು ಮತ್ತು ಈಗಷ್ಟೆ ಮು… | |
| Sushrutha on ನನ್ನ ಸಧ್ಯದ ಓದು ಮತ್ತು ಈಗಷ್ಟೆ ಮು… |
ತಿಂಗಳ ಬುತ್ತಿ
Blog Stats
- 8,147 hits
Top Posts
ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು
ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು
ಜಿತೇಂದ್ರ
ಮಂಗಳವಾರ, 8 ಜುಲೈ 2008 (10:11 IST)
ಶೆಟ್ಟರ ಒಂದಿಷ್ಟು ಕನಸುಗಳು
‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ.
ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.
ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮
ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಹೊ!!! ಶೆಟ್ರು ಕನಸ್ ಕಾಣಕ್ ಸುರು ಹಚ್ಚಾರ …….. ಚಲೋ ಬಣ್ಣ ಬಣ್ಣದ ಕನಸು ಬಿಳ್ಲಿ … ನನ್ನ ಹಾರೈಕೆ.
-ಅಮರ
ಶೆಟ್ರೆ, ಏನ್ ಕನಸ್ ಕಾಣ್ಲಿಕ್ಕ್ ಹತ್ತೀರಲ್ಲ…??
ಅಮರ,
ನಿಮ್ಮ ಹಾರೈಕೆ ನಿಜವಾಗಲಿ ಎನ್ನುವುದು ನನ್ನ ಹಾರೈಕೆ
ಗಣೇಶ,
ಕನಸಿನ ನಗರಿ ಮುಂಬಯಲ್ಲಿ ಕನಸುಗಳನ್ನು ಮಾರುವುದು ಇದೆ, ನಾನು ಕಾಣ್ತಾಯಿರೋದು ನಿಮ್ಮ ಹಾರೈಕೆಯಿಂದ, ಫ್ರೀಯಾಗಿ…
-ಪ್ರೀತಿಯಿರಲಿ
ಶೆಟ್ಟರು