ಹೀಗೊಂದಿಷ್ಟು ವಿಷ-ಯಗಳು

     ನೀಲಿಗಟ್ಟಿದೆ ಮನಸು
    ವಿಷದ ವಿಷಯಗಳಿಂದ
    ಪಕ್ಕದವನ ಪ್ರಮೋಷನ್ನಿಂದ,ರೂಂ-
    ಮೇಟನ ಹೋಸ ಪ್ಯಾಕೇಜಿನಿಂದ.

    ಅಪ್ಪನನ್ನು ಕೇಳಬೇಕು
    ಅವನಿಗರಲಿಲ್ಲವೇ ಈ ಚಿಂತೆ,
    ನನ್ನನ್ನಷ್ಟೇಕೆ ಕಾಡುವಿರಿ ಬಿಡಿ, ವಿಷ-
    ಯಗಳೇ ವಿಷವುಣಿಸಬೇಡಿ, ಮನಸಿಗೆ.

2 Responses to “ಹೀಗೊಂದಿಷ್ಟು ವಿಷ-ಯಗಳು”


  1. 1 sunaath August 18, 2008 at 3:11 pm

    ಮನಸ್ಸು ಅಂದ ಮೇಲೆ ವಿಷ, ಅಮೃತ ಎಲ್ಲಾ ಇರೋದs ಅಲ್ಲೇನ್ರೀ. ನಮ್ಮ ಅಪ್ಪ, ಅಜ್ಜಾ ಎಲ್ಲಾರಿಗೂ ಇದು ಇದ್ದs ಇತ್ತೇಳ್ರಿ. ಇಲ್ಲಾ ಅಂದರ ರಾಮಾಯಣ, ಮಹಾಭಾರತ ಹ್ಯಾಂಗ ಆಗ್ತಿದ್ವು?

  2. 2 ಸಂತೋಷಕುಮಾರ August 20, 2008 at 6:10 pm

    Onsite ಎಲ್ಲಿ ಬಿಟ್ರಿ?:)


Leave a Reply




a

Blog Stats

  • 7,975 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು