ಸಾಕಾಗಿದೆ ಈ ಒಂಟಿ ಬದುಕು, ಎಲ್ಲಿರುವೆ ಗೆಳತಿ ಒಮ್ಮೆಯಾದರೂ ಸಿಗು

ನನ್ನೊಳಗಿರುವ ನಿನಗೂ
ನಿನ್ನೊಳಗಿರುವ ನನಗೂ
ಎನೂ ಸುಖವಿಲ್ಲ ಗೆಳತಿ,
ನಿನಲ್ಲಿ, ನಾನಿಲ್ಲಿ
ಮಾತು ಬರಿ ಮೊಬೈಲಿನಲ್ಲಿ
ನೋಟ ನಿನ್ನ e-ಮೇಲಿನಲ್ಲಿ.

 
ಈ ಎಸ್ಸೆಮ್ಮೆಸ್ಸು, ಇ-ಮೇಲು
ಈ ಚಾಟು, ಗೆಳತಿ ಇಷ್ಟಿಷ್ಟೆ ಸಾಕಾಗಿದೆ,
ಒಮ್ಮೆ ಇಡಿಯಾಗಿ ಸಿಗು
ನಿನ್ನ ನಗು, ಆ ಮಾತು
ನಿನ್ನ ತೊಳತೆಕ್ಕೆಯಲ್ಲಿ ಕರಗಬೇಕಿದೆ.

 

ನೀ ನಿಂತಲ್ಲೆ ನದಿಯಾದೆ,
ಎದ್ದುಹೋದರೆ ಅಲೆಯಾದೆ,
ಅದಾವುದು ನನಗಿಷ್ಟವಿಲ್ಲ.
ನೀ ಎದ್ದು ಹೋದಮೇಲೂ
ಉಳಿದಿತ್ತಲ್ಲ ನಿನ್ನ ಮೈಯ ಘಮ
ಅದು ನನಗಿಷ್ಟ, ಅದು ನೀನಾಗು.

5 Responses to “ಸಾಕಾಗಿದೆ ಈ ಒಂಟಿ ಬದುಕು, ಎಲ್ಲಿರುವೆ ಗೆಳತಿ ಒಮ್ಮೆಯಾದರೂ ಸಿಗು”


  1. 1 Mallikarjunagowda September 8, 2008 at 12:33 am

    ಶೆಟ್ರ ಈಗ ಎಲ್ಲಾ virtual ಜಗತ್ತು ಹೊಂಟದ … virtual organization , virtual office, virtual memory, ಹಿಂಗಾಗಿ ಯಾವುದು ರಿಯಾಲಿಟಿ ಇಲ್ರೀ … ಅದಕ ಜೀವನದ ಮತ್ತೊಂದು ಭಾಗವಾದ ಗೆಳತಿ ಕೂಡ virtual ಆದ್ರ ಎಷ್ಟು ಕಷ್ಟ ಆಗತ್ತಾ ಅನ್ನೋದನ್ನ ಸರಿಯಾಗಿ ಬಿಡಿಸಿ ಇಟ್ಟೀರಿ (ನನಗ ಅದರ ಬಗ್ಗೆ ಅನುಭವ ಇಲ್ರಿಪಾ .. ) ಮತ್ತೆ ಇದನ್ನ ಹೋಗಲಾಡ್ಸಾಕ ಏನರ ಕ್ರಮ ತಗೊರೆಲಾ?
    ಲಗೂನ ಲಗ್ನ ಆಗ್ರೆಲಾ ಅಂತ ನನ್ನ ಕೆಳಗ comment ಬರಿಯುವಾರು ಹೇಳಬಹುದು ….

  2. 2 sunaath September 8, 2008 at 7:52 pm

    ಮಲ್ಲಿಕಾರ್ಜುನಗೌಡರು ಮ್ಯಾಲ ಕಮೆಂಟ ಮಾಡ್ಯಾರಲ್ಲ, ಹಂಗs ಮಾಡ್ರಿ. ಆದರ ಅದನ್ನೂ virtual ಮಾಡಬ್ಯಾಡ್ರಿ.

  3. 3 ಶೆಟ್ಟರು (Shettaru) September 9, 2008 at 11:48 am

    “ಎಲ್ಲಿರುವೆ ಗೆಳತಿ ಒಮ್ಮೆಯಾದರೂ ಸಿಗು” ಅಂಥ ಕೂಗು ಹಾಕ್ತಾಯಿರೊದೆ ಅದಕ್ಕೆ ಗೌಡ್ರೆ..

    ಕಾಕಾ virtualಕ್ಕಿಂತ cultural ಮದವಿನ ಛಲೊ ಅಲ್ಲೇನ್ರಿ?

    ಪ್ರೀತಿಯಿರಲಿ

    ಶೆಟ್ಟರು

  4. 4 ಮಾರುತಿ September 10, 2008 at 12:07 pm

    ಈ ಎಸ್ಸೆಮ್ಮೆಸ್ಸು, ಇ-ಮೇಲು
    ಈ ಚಾಟು, ಗೆಳತಿ ಇಷ್ಟಿಷ್ಟೆ ಸಾಕಾಗಿದೆ,
    ಒಮ್ಮೆ ಇಡಿಯಾಗಿ ಸಿಗು
    ನಿನ್ನ ನಗು, ಆ ಮಾತು
    ನಿನ್ನ ತೊಳತೆಕ್ಕೆಯಲ್ಲಿ ಕರಗಬೇಕಿದೆ.

    - ಬೆಳಿಗ್ಗೆಯ ಪ್ರಾರ್ಥನೆಯಾ ಅಥವಾ ಸಂಜೆಯ ಚಡಪಡಿಕೆಯೋ?

  5. 5 ಶೆಟ್ಟರು (Shettaru) September 11, 2008 at 9:07 am

    ಇಲ್ಲಾ ಗೆಳೆಯಾ ಇದು ಪ್ರತಿ ಕ್ಷಣದ ‘ಕನವರಿಕೆ’

    ಪ್ರೀತಿಯಿರಲಿ
    ಶೆಟ್ಟರು


Leave a Reply




a

ಕನ್ನಡ ಹನಿಗಳು

Blog Stats

  • 6,231 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.