ಮತ್ತಷ್ಟು ಹನಿಗಳು

ಪ್ರೀತಿಯಿಂದ

ನಿನ್ನ ಕಣ್ಣಿನಾಳದಲ್ಲಿ ಇಳಿದು
ನೋಡುವಾಸೆ ನನಗೂ ಇದೆ ಗೆಳತಿ,
ಆದರೆ ಪ್ರೀತಿಯ ಸುಳಿಗೆ
ಸಿಕ್ಕು ಮುಳುಗುವ ಭಯ ನನ್ನದು. 

ಗಾಳಿಯೊಡನೆ ಗುದ್ದಾಡುವ
ಬಯಕೆಯಿಂದ, ಬೈಕಿನ
ಕಿವಿ ಹಿಂಡಿದರೆ,
ಹಿಂದೆ ನೀನು ತಬ್ಬಿ ಕುಳಿತ
ಸ್ಥಿತಿಗೆ ಆ ಗಾಳಿ ಉಸಿರುಗಟ್ಟಿ ಸತ್ತಿತು.

ಗೆಳತಿ ನೀನಗೆ ಕೇವಲ
ಕಳೆದುಕೊಂಡ ಹತಾಶೆಯಿದೆ,
ಆದರೆ ನನಗೆ ಹತಾಶೆಯೊಂದಿಗೆ
ಬಿಟ್ಟು ಬಂದ ನೋವು ಜೊತೆಗಿದೆ.

ನನ್ನೆದೆಗೆ ಒರಗಿ
ನಿನ್ನೆದೆಯ ಮೆದು ತಾಕಿಸಿದಾಗಲೂ
ಹರಿಯದ ನನ್ನ ಕಾಮ, ಇವತ್ತಿನ
-ತನಕ ನಿನ್ನಲ್ಲಿ ಅಸಡ್ಡೆ ಮೂಡಿಸಿದ್ದರೆ?
ಅದು ನನ್ನ ತಪ್ಪಲ್ಲ ಗೆಳತಿ. ಯಾಕೆಂದರೆ,
ಅದೇ ಕಾರಣಕ್ಕೆ ನಾನಿನ್ನು ಕನ್ನಡಿಯೊಳಗೆ
ಕಣ್ಣಿಟ್ಟು ನೋಡಿಕೊಳ್ಳುತ್ತೆನೆ, ದಿನಾಲೂ
ಹೆಮ್ಮೆಯಿಂದ, ಅಷ್ಟೆ ಪ್ರೀತಿಯಿಂದ.

6 Responses to “ಮತ್ತಷ್ಟು ಹನಿಗಳು”


  1. 1 ರಂಜಿತ್ November 20, 2008 at 5:27 pm

    ನಿನ್ನ ಕಣ್ಣಿನಾಳದಲ್ಲಿ ಇಳಿದು
    ನೋಡುವಾಸೆ ನನಗೂ ಇದೆ ಗೆಳತಿ,
    ಆದರೆ ಪ್ರೀತಿಯ ಸುಳಿಗೆ
    ಸಿಕ್ಕು ಮುಳುಗುವ ಭಯ ನನ್ನದು.

    ಶೆಟ್ರೇ ಇದು ಭಾಳ ಇಷ್ಟ ಆತು ನೋಡ್ರಿ..:)

  2. 2 ಶೆಟ್ಟರು (Shettaru) November 20, 2008 at 5:39 pm

    ರಂಜಿತ್ ಧನ್ಯವಾದಗಳು,

    ನಿಮಗೂ “ಆ” ಭಯ ಇದೆ ಅಂತಾಯ್ತು? ;)

    ಪ್ರೀತಿಯಿರಲಿ

    ಶೆಟ್ಟರು

  3. 3 sunaath November 20, 2008 at 8:17 pm

    ವೆರಿ ಗುಡ್ ಶಾಯರಿ, ಶೆಟ್ಟರs.
    ಆದರ, ಧೈರ್ಯದಿಂದ ಕಣ್ಣಾಗ ಇಣಕಿ ಹಾಕಿ, ಪ್ರೀತಿಯ ಸುಳಿಯೊಳಗ ಗರಗರಾ ತಿರಗರಿ.
    ಮಸ್ತ ಮಜಾ ಬರತsದ.

  4. 4 ಭಾವಜೀವಿ November 21, 2008 at 9:55 am

    ಶೆಟ್ಟರೆ,
    ಬಹಳ ಚೆನ್ನಾಗಿದೆ!! ಅದರಲ್ಲೂ ಎರಡನೆಯ ಹನಿ ಬಹಳ ಇಷ್ಟವಾಯ್ತು!!

  5. 5 ವಿಜಯರಾಜ್ ಕನ್ನಂತ ಡಿಸೆಂಬರ್ 10, 2008 at 10:46 am

    modala 2 hani ishta aaytu

  6. 6 ರಾಕಿ ಫೆಬ್ರವರಿ 23, 2009 at 9:04 am

    ಗೆಳತಿ ನೀನಗೆ ಕೇವಲ
    ಕಳೆದುಕೊಂಡ ಹತಾಶೆಯಿದೆ,
    ಆದರೆ ನನಗೆ ಹತಾಶೆಯೊಂದಿಗೆ
    ಬಿಟ್ಟು ಬಂದ ನೋವು ಜೊತೆಗಿದೆ.

    ನಿಮ್ಮ ಗೆಳತಿಗೆ ಹತಾಶೆಯಿದೆ ಮಾತ್ರ ಇದೆ ಅ೦ತ ಹೇಗೆ ಗೊತ್ತಾಯ್ತು ಶೆಟ್ಟರೆ?.. ಚೆನ್ನಾಗಿದೆ..


Leave a Reply




a

ಕನ್ನಡ ಹನಿಗಳು

Blog Stats

  • 6,231 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.