ಬ್ಲಾಗ ಸಾಹಿತ್ಯದ ಪ್ರಚಾರಕ್ಕೆ ಜ್ಞಾನಪೀಠಿ

ಬ್ಲಾಗ ಸಾಹಿತ್ಯದ ಪ್ರಚಾರಕ್ಕೆ ಜ್ಞಾನಪೀಠಿ
ಇತ್ತಿಚಿನ ದಿನಗಳಲ್ಲಿ ಬ್ಲಾಗ ಬರೆಯುತ್ತಿರುವವರ ಸಂಖ್ಯೆ ಬೆಳೆಯುತ್ತಿದ್ದರು ಅದಕ್ಕೆ ಪೂರಕವಾಗಿ ಬ್ಲಾಗ ಓದುಗರ ಸಂಖ್ಯೆ ಬೆಳೆಯುತ್ತಿಲ್ಲದಿರುವುದನ್ನು ಗಮನಿಸಿ “ಕನ್ನಡ ಬ್ಲಾಗ ಸಾಹಿತ್ಯ ಪರಿಷತ್” ಜ್ಞಾನಪೀಠಿ ಅನಂತಮೂರ್ತಿಯವರನ್ನು ತಮ್ಮ ಬ್ರಾಂಡ್ ಅಂಬಾಸಿಡರ ಆಗಿ ನಿಯುಕ್ತಗೊಳಿಸಿದ್ದಾರೆ.

ಅನಂತಮೂರ್ತಿಯವರು ಇದನ್ನು ಸವಾಲಾಗಿ ಸ್ವಿಕರಿಸಿ, ಉತ್ತಮ ಪ್ರಾಚಾರಕ್ಕಿಂತ ಇಂದು ಜನರು “ಅಪಪ್ರಚಾರ” ಮತ್ತು “ಬ್ರೇಕಿಂಗ್ ನ್ಯೂಜ್”ಗಳಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆಂದು ಕಳೆದ ವರ್ಷದ “ವಾರ್ಷಿಕ ಸಾಹಿತ್ಯಿಕ ಜಗಳ”ವನ್ನು ಉದಾಹರಿಸಿದ್ದಾರೆ, ಕಳೆದ ವರ್ಷದ “ವಾರ್ಷಿಕ ಸಾಹಿತ್ಯಿಕ ಜಗಳ”ದಿಂದಾಗಿ ಭೈರಪ್ಪನವರ “ಆವರಣ” ಕನ್ನಡದ ಸೂಪರ್ ಹಿಟ್ ಆಗಿತ್ತು ಎಂದು ನೆನಪಿಸುತ್ತಾ, ಬ್ಲಾಗ ಸಾಹಿತ್ಯ ಪ್ರಚಾರಕ್ಕೆ ಅದೆ ಹಿನ್ನಲೆಯಿಟ್ಟು ಪ್ರಚಾರ ಆರಂಭಿಸುವುದಾಗಿ ಚಿಂತನೆ ನೆಡೆಸಿ ಪ್ರಚಾರವನ್ನು ಆರಂಬಿಸಿಯೆ ಬಿಟ್ಟರು.

ಇನ್ನು ಕನ್ನಡ ಬ್ಲಾಗ ಸಾಹಿತ್ಯ ತನ್ನ ಉತ್ತುಂಗಕ್ಕೆ ಎರುವುದು ಖಂಡಿತ..!!!???

ಪೂರಕ ಓದಿಗೆ: ಕನ್ನಡಪ್ರಭ

4 Responses to “ಬ್ಲಾಗ ಸಾಹಿತ್ಯದ ಪ್ರಚಾರಕ್ಕೆ ಜ್ಞಾನಪೀಠಿ”


  1. 1 ಸುನಾಥ December 22, 2008 at 6:37 pm

    ತಮ್ಮ ಕಾದಂಬರಿಗಳಿಗೆ ಓದುಗರೇ ಇಲ್ಲದೆ, ಎಲ್ಲರೂ ಭೈರಪ್ಪನವರ ಓದುಗರೇ ಆಗಿದ್ದರಿಂದ ಈ ಗಡ್ಡದ ಮೂರ್ತಿ ಕೆರಳಿದಂತಿದೆ. ತಾನು ಬರೆದದ್ದೇ “ರುಜುವಾತು” ಎಂದು ತಿಳಿದ ಅಜ್ಞಾನಮೂರ್ತಿ “ತಾನು ಮಣ್ಣು ಮುಕ್ಕಿದರೂ, ಮೀಸೆ ಮಣ್ಣಾಗಿಲ್ಲ” ಎಂದು ಊಳಿಡುತ್ತಿದೆ.

  2. 2 M G Harish December 22, 2008 at 10:52 pm

    ಅನಂತಮೂರ್ತಿಯವರು ಈ ಮಟ್ಟಕ್ಕೆ ಇಳಿದು, ಫಾಸ್ಸಿಸ್ಟ್ ಗಳ ಬೆಂಬಲಿಗರನ್ನು ದೂಷಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದರೆ ಅವರಿಗೆ ಬೇರೆ ಕೆಲಸವಿಲ್ಲವಿರಬೇಕು… ಅದಿರಲಿ, ಅವರೂ ಒಬ್ಬ ಬ್ಲಾಗರ್ ತಾನೆ?

  3. 3 vikas hegde December 23, 2008 at 12:25 am

    thats y I admire him so much ! :)

  4. 4 ಶೆಟ್ಟರು (Shettaru) December 23, 2008 at 9:05 am

    ಕಾಕಾ,

    ಕೆರಳಿದವರನ್ನೆಲ್ಲ ನಾವು ಕೇಳಬೇಕಿಲ್ಲ ಅಲ್ವಾ?

    ಹರೀಶ್,

    ಅವರು ತಮ್ಮನ್ನು ಸೇರಿಸಿಯೇ ಹೇಳಿದ್ದು.. ;)

    ವಿಕಾಸ್,

    ನಾನೂ ಕೂಡಾ ;)

    ಪ್ರೀತಿಯಿರಲಿ

    ಶೆಟ್ಟರು


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು