Archive for February, 2009

ಪ್ರೇಮಿಗಳ ದಿನ: ನೀ ಬರುವ ದಾರಿಯಲ್ಲಿ

 ನೀ ಬರುವ ದಾರಿಯಲ್ಲಿ

ಗೆಳತಿ,

ಈ ಬದುಕು ನೀನಗಾಗಿ
ಪ್ರೀತಿಯಿಂದ,
ಪ್ರೀತಿಗಾಗಿ,
ಪ್ರೀತಿಗೋಸ್ಕರ. 

**************************

ನೀ ಬರುವ ದಾರಿ ಕಾಯುತ್ತಿವೆ
ನನ್ನ ಮನೆ-ಮನಗಳೆರಡೂ, ಮತ್ತೆ
ದೇವರೆದುರಿನ ಹಣತೆಯಲ್ಲಿ
ಈಗಷ್ಟೆ ಮಡಿಯಿಂದ ಹೋಸೆದ ಬತ್ತಿಯೂ.

 ಜನುಮ-ಜನುಮದ ಅನುಭಂದವೋ
ನಾನರಿಯೆ, ಈ ಜನ್ಮದ್ದಂತೂ ನಿಜ,
ಈ ಉಸಿರಿನಷ್ಟೆ, ನೀ
ನನ್ನೊಳಗಿರುವುದು ಅಷ್ಟೆ ಸಹಜ.

ಆಕಾಶ-ಭೂಮಿ ಒಂದಾದಂತೆ
ನನಗೇಕೋ ಈ ಅನಿಸಿಕೆ,
ನೀ ಬರುವ ದಾರಿ ಕಾಯುವುದಷ್ಟೆ
ಈಗ ಈ ಮನದ ಹವಣಿಕೆ.

ಕಣ್ರೆಪ್ಪೆಗೆ ದಣಿವಿಲ್ಲ
ನಿನ್ನ ದಾರಿ ಕಾಯಲು,
ನಿದ್ರೆಯದ್ದಂತೂ ಸುಳಿವಿಲ್ಲ
ಮನದಲ್ಲೊಮ್ಮೆ ನೀ ಹಾಯಲು

ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.

ಅವಳು ಕಟ್ಟಿ ಕೊಟ್ಟ ಹಾಲ್ಗನಸು

ಅವಳು ಕಟ್ಟಿ ಕೊಟ್ಟ ಹಾಲ್ಗನಸು
ತಮಸೋಮ ಜ್ಯೋತಿರ್ಗಮಯ
ಹೀಗಾಗಿ ಅವಳೇ ನನ್ನ ಗಮ್ಯ..

ಅವಳ ಕಣ್ಣುಗಳಲ್ಲಿ
ಎನೋ ಸೇಳೆತವಿದೆ
ಇಲ್ಲದಿದ್ದರೆ, ಪದೇ ಪದೇ
ರಜೆ ನಾ ಹಾಕುವವ’ನಲ್ಲ’

ಸಾಗರ ದಡದಲ್ಲಿ ಸಿಕ್ಕ
ಶಂಖದ ಹೂ ನೀನು,
ಅದರ ಮತ್ತೇ ಸಾಗರ ಸೇರುವ
ತವಕದ ಹೆಸರೇ “ನನ್ನ ಪ್ರೀತಿ”

ಅವಳು ಕಟ್ಟಿ ಕೊಟ್ಟ
ಹಾಲ್ಗನಸು,
ಈಗಷ್ಟೆ ನನ್ನೊಳಗೆ
ಮೊಳಕೆಯೊಡದಿದೆ.

ಆ ಸಂಜೆ,
ಅವಳಿಗೆ ನನ್ನ ಪ್ರೀತಿ ತಿಳಿಸಿದಾಗ
ಸಾಗರ ಕೂಡಾ ಬೆಚ್ಚಿಬಿದ್ದು ಬೇವಿತೆದ್ದಿತು.


a

Blog Stats

  • 7,925 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು