ಪ್ರೇಮಿಗಳ ದಿನ: ನೀ ಬರುವ ದಾರಿಯಲ್ಲಿ

 ನೀ ಬರುವ ದಾರಿಯಲ್ಲಿ

ಗೆಳತಿ,

ಈ ಬದುಕು ನೀನಗಾಗಿ
ಪ್ರೀತಿಯಿಂದ,
ಪ್ರೀತಿಗಾಗಿ,
ಪ್ರೀತಿಗೋಸ್ಕರ. 

**************************

ನೀ ಬರುವ ದಾರಿ ಕಾಯುತ್ತಿವೆ
ನನ್ನ ಮನೆ-ಮನಗಳೆರಡೂ, ಮತ್ತೆ
ದೇವರೆದುರಿನ ಹಣತೆಯಲ್ಲಿ
ಈಗಷ್ಟೆ ಮಡಿಯಿಂದ ಹೋಸೆದ ಬತ್ತಿಯೂ.

 ಜನುಮ-ಜನುಮದ ಅನುಭಂದವೋ
ನಾನರಿಯೆ, ಈ ಜನ್ಮದ್ದಂತೂ ನಿಜ,
ಈ ಉಸಿರಿನಷ್ಟೆ, ನೀ
ನನ್ನೊಳಗಿರುವುದು ಅಷ್ಟೆ ಸಹಜ.

ಆಕಾಶ-ಭೂಮಿ ಒಂದಾದಂತೆ
ನನಗೇಕೋ ಈ ಅನಿಸಿಕೆ,
ನೀ ಬರುವ ದಾರಿ ಕಾಯುವುದಷ್ಟೆ
ಈಗ ಈ ಮನದ ಹವಣಿಕೆ.

ಕಣ್ರೆಪ್ಪೆಗೆ ದಣಿವಿಲ್ಲ
ನಿನ್ನ ದಾರಿ ಕಾಯಲು,
ನಿದ್ರೆಯದ್ದಂತೂ ಸುಳಿವಿಲ್ಲ
ಮನದಲ್ಲೊಮ್ಮೆ ನೀ ಹಾಯಲು

ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.

7 Responses to “ಪ್ರೇಮಿಗಳ ದಿನ: ನೀ ಬರುವ ದಾರಿಯಲ್ಲಿ”


  1. 1 ಸುನಾಥ February 13, 2009 at 5:54 pm

    “ನಿನ್ನೆ ರಾತ್ರಿ ನೀಲಾಕಾಶದಲ್ಲಿ
    ನಕ್ಷತ್ರಗಳಿಗೆ ನಿನ್ನದೇ ಚಿಂತೆ,
    ನೀ ಬರುವ ಹಾದಿಯಲ್ಲೇ
    ಹೂಡುವುವಂತೆ ಬೆಳಕಿನಾ ಸಂತೆ.”

    ವಾಹ್ ಶೆಟ್ಟರ, ಶಾಯರೀ ಪಸಂದ ಆತು.
    ಸುಹಾನ ಅಲ್ಲಾ!

  2. 2 gramastha February 13, 2009 at 8:48 pm

    ವ್ಹಾವ್…ಸುನಾಥರು ಹೇಳಿದ ಸಾಲುಗಳೂ ನನ್ನ ಮನಮುಟ್ಟಿದವು.

  3. 3 ಶೆಟ್ಟರು (Shettaru) February 14, 2009 at 5:45 pm

    ಥ್ಯಾಂಕ್ಸ್ರಿ ಕಾಕಾ,

    ನಿಮ್ಮ ವ್ಹಾ..ವ್ಹಾ..ಕ,

    “ಇರ್ಶಾದ” ಅನ್ನರಿ ಇನ್ನೋದು ಹಂಗ “ಸಮಾ ಮೇಹಫಿಲ್ ಕೆ ನಾಮ್” ಹಾಕೂನಂತ..

    ಗ್ರಾಮಸ್ಥರಿಗೆ,

    ಸ್ವಾಗತ, ತಮ್ಮ ಮೆಚ್ಚುಗುಗೆ ಆಭಾರಿ..

    ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಷಯ ;)

    -ಶೆಟ್ಟರು

  4. 4 ರಂಜಿತ್ February 15, 2009 at 11:09 am

    ಸರ್,

    ಗ್ರೀಟಿಂಗ್ಸ್ ನಲ್ಲಿ “ನೋವಿಗೂ” ಆಗಬೇಕಾಗಿದ್ದ ಜಾಗದಲ್ಲಿ ನೂವಿಗೂ ಅಂತಾಗಿದೆ.

    ಕವಿತೆ ಚೆನ್ನಾಗಿದೆ.

  5. 5 ಶೆಟ್ಟರು (Shettaru) February 16, 2009 at 8:39 am

    ರಂಜಿತ್ ,

    ಧನ್ಯವಾದಗಳು, ತಿದ್ದುಪಡಿ ಮಾಡಲಾಗಿದೆ.

    -ಶೆಟ್ಟರು

  6. 6 ವಿಜಯರಾಜ್ ಕನ್ನಂತ February 16, 2009 at 2:58 pm

    koneya 2 pyaara thumbaa chennaagittu

  7. 7 ರಾಕಿ February 23, 2009 at 8:58 am

    ಚೆನ್ನಾಗಿದೆ


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು