
ಇದೇ ಎಪ್ರೀಲ್ ೧೯ರ ರವಿವಾರ ಸಾಯಂಕಾಲ ಮುಂಬಯಿ ಕನ್ನಡಿಗರು “ಭಾವಗಳೊಂದಿಗೆ ಒಂದು ಸುಂದರ ಸಂಜೆ” ನಾಡಿನ ಹೆಸರಾಂತ ಗಾಯಕ ಮತ್ತು ಸಂಗೀತ ನಿರ್ದೇಶಕ “ಸಿ. ಅಶ್ವತ್ಥ್”ರೊಡನೆ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡದ ಹೆಮ್ಮೆಯ ಸಂಘ್ಹಗಳಲ್ಲೊಂದಾದ “ಮುಂಬಯಿ ಕನ್ನಡ ಸಂಘ್ಹ”ವು ‘ಮುಂಬೈನಲ್ಲಿ ಸಿ.ಅಶ್ವಥ್’ ಎಂಬ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದ್ದಾರೆ, ಸಿ.ಅಶ್ವಥ್ ಇದೇ ಮೊದಲ ಬಾರಿಗೆ ಮುಂಬೈ ಕನ್ನಡಿಗರಿಗಾಗಿ ರಸಸಂಜೆಯೊಂದನ್ನು ನಡೆಸಿಕೊಡಲಿದ್ದು, ಆಯ್ದ 24 ಗೀತೆಗಳಿಂದ ಮೂರುವರೆ ಗಂಟೆಗಳ ಕಾಲ ಮುಂಬೈ ಕನ್ನಡಿಗರನ್ನು ಗಾನಸುಧೆಯಲ್ಲಿ ಮೈಮರೆಸಲಿದ್ದಾರೆ. ಅಶ್ವಥ್ ರೊಂದಿಗೆ ಎಂ ಡಿ ಪಲ್ಲವಿ, ಸುಪ್ರಿಯಾ ಮತ್ತು ಮಂಗಳ ಸಹ ಗಾನ ಸುಧೆ ಹರಿಸಲಿದ್ದಾರೆ. ಗಾಯಕಿ ಸಂಗೀತ ಕಟ್ಟಿ ವಿಶೇಷ ಹಾಡೊಂದನ್ನು ಹಾಡಲಿದ್ದಾರೆ. ಕುವೆಂಪು, ನರಸಿಂಹಸ್ವಾಮಿ, ಗೋಪಾಲಕೃಷ್ಣಅಡಿಗ, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಎಚ್.ಎಚ್.ವೆಂಕಟೇಶಮೂರ್ತಿ, ಲಕ್ಷ್ಮಿನಾರಾಯಣ ಭಟ್ಟ, ವ್ಯಾಸರಾವ್…ಮುಂತಾದವರ ಭಾವಗೀತೆಗಳು ಶಣ್ಮುಖಾನಂದ ಸಭಾಂಗಣ ಮುಂಬೈನಲ್ಲಿ ಪ್ರತಿಧ್ವನಿಸಲಿವೆ.
ಪಾಸು ಹೊಂದಿದವರು ಮಾತ್ರ ಕಾರ್ಯಕ್ರಮ ನಡೆಯುವ ಸಭಾಂಗನಕ್ಕೆ ಪ್ರವೇಶ ಹೊಂದಬಹುದಾಗಿದ್ದು, ಪಾಸುಗಳಿಗಾಗಿ ಸಂಘದ ಕಛೇರಿಯಲ್ಲಿ ವಿಚಾರಿಸಬಹುದಾಗಿದೆ.
ಕರ್ನಾಟಕ ಸಂಘ, ಮುಂಬಯಿ, ವಿಚಾರಣೆಗಾಗಿ ಮಾಹೀತಿಗಳು:
ದೂರವಾಣಿ ಸಂಖ್ಯೆ: 24377022/ 24379645/ 24339346
ಫ್ಯಾಕ್ಸ ಸಂಖ್ಯೆ: 24381486
ಮಿಂಚಂಚೆ: karnataka.sangha@yahoo.com
ವೇಬಸೈಟ್: http://karnatakasanghamumbai.com/
ಎಲ್ಲರೂ ಬನ್ನಿ, ಕಾರ್ಯಕ್ರಮದಲ್ಲಿ ಭೇಟಿಯಾಗೋಣ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗಲ್ಲಿ ಗಲ್ಲಿಗೆ, ೧೯ರ ಸಂಜೆ ಮುಂಬಯಿ ಕನ್ನಡಿಗರೆಲ್ಲ ಶಣ್ಮುಖಾನಂದ ಹಾಲ್ಗೆ…
Recent Comments