ನಿಮಗಿದು ಗೋತ್ತೆ, ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು

ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು

ಹೌದ್ರಿ, ಭಾರತದಲ್ಲಿ ಎಲ್ಲೆಲ್ಲಿ ಖಾದಿ ರಾಷ್ಟ್ರ ದ್ವಜ ಹಾರಾಡ್ತೈತಿ ಅವು ನಮ್ಮೂರಾಗ ತಯಾರಾಗಿರ್ತಾವು.

ಹುಬ್ಬಳ್ಳಿ-ಧಾರವಾಡದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (Karnataka Khadi Gramodyoga Samyukta Sangha (KKGSS)) ಭಾರತದ ಎಕೈಕ ಸರ್ಕಾರದ ಮಾನ್ಯತೆ ಪಡೆದ ರಾಷ್ಟ್ರ ದ್ವಜ ತಯಾರಿಕಾ ಸಂಸ್ಥೆ. ಅಲ್ಲಿ ತಯಾರಾದ ರಾಷ್ಟ್ರ ದ್ವಜಗಳೆ ಭಾರತದ ಎಲ್ಲಡೆ ಬಾನೆತ್ತರಕ್ಕೆ ಹಾರಾಡುತ್ತವೆ.

ಈ ಹುಬ್ಬಳ್ಳಿಯ ರಾಷ್ಟ್ರ ದ್ವಜ ತಯಾರಿಕಾ ಕೆಂದ್ರಕ್ಕೆ ಸರಬರಾಜಾಗುವ ಬಟ್ಟೆ ತಯಾರಾಗುವುದು ಇದೆ “ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ”ದ ಬಾಗಲಕೋಟೆ ಶಾಖೆಯಲ್ಲಿ. ಅಲ್ಲಿ ಖಾದಿಯ ನೂಲು ತೆಗೆದು, ಅದನ್ನು ಸರಿಯಾಗಿ ನೇಯಲಾಗುತ್ತದೆ. ಮೂಲತವಾಗಿ ಕೇವಲ ಬಿಳಿ ಬಣ್ಣದಲ್ಲಿರುವ ಖಾದಿಯನ್ನು ಸರಿಯಾಗಿ ಮೂರು ಪ್ರಮಾಣದಲ್ಲಿ ವಿಂಗಡಿಸಿ, ಅವುಗಳಲ್ಲಿ ಎರಡು ಲಾಟಗಳನ್ನು ಭಾರತಿಯ ಗುಣಮಾಪನ ಸಂಸ್ಥೆ (Bureau of Indian Standards) ನಿಗದಿಪಡಿಸಿದ ಕರಾರುವಾಕ್ಕಾದ ಕೇಸರಿ ಮತ್ತು ಹಸಿರು ಬಣ್ಣ ಹಾಕಲಾಗುತ್ತದೆ.

ಹಾಗೆ ಮೂರು ಬಣ್ಣಗಳ ಬಟ್ಟೆಗಳನ್ನು ಹುಬ್ಬಳ್ಳಿಗೆ ತಂದು, ನಿಗದಿ ಪಡಿಸಲಾದ ಪ್ರಮಾಣದಲ್ಲಿ ಬಟ್ಟೆ ಕತ್ತರಿಸಿಕೊಳ್ಳುತ್ತಾರೆ, ನಂತರ ಬಿಳಿ ಬಟ್ಟೆಯ ಎರಡೂ ಬದಿಗಳಲ್ಲಿ ಅಶೋಕ ಚಕ್ರವನ್ನು ಮುದ್ರಿಸಿ (ಚಕ್ರವು ಎರಡೂ ಬದಿಗಳಲ್ಲಿ ಸರಿಯಾಗಿ ಒಂದೆ ಜಾಗದಲ್ಲಿ ಮೇಳೈಸಬೇಕು), ಮೂರು ಬಣ್ಣದ ಬಟ್ಟೆಗಳನ್ನು ಸೇರಿಸಿ ಹೋಲೆಯಲಾಗುತ್ತದೆ (ರಾಷ್ಟ್ರದ್ವಜದ ಉದ್ದ ಮತ್ತು ಅಗಲದ ಪರಿಮಾಣ ೨:೩ ಅನುಪಾತದಲ್ಲಿರುತ್ತದೆ). ಇವುಗಳಲ್ಲಿ ಯಾವುದಾದರೂ ತಪ್ಪಾದಲ್ಲಿ ಅದು ಭಾರತದ ರಾಷ್ಟ್ರ ದ್ವಜ ಸಂಹೀತೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ(ಇಂತಹ ನೂರಕ್ಕೂ ಹೆಚ್ಚು ನಿಯಮಗಳು/ಗುಣಮಾಪನಗಳು ರಾಷ್ಟ್ರ ದ್ವಜ ಸಂಹೀತೆಯಲ್ಲಿದೆ).

ಕೋನೆಯ ಹನಿ: ನಮ್ಮಲ್ಲಿ ಎಷ್ಟು ಜನಕ್ಕೆ ಗೋತ್ತು ಕೇವಲ ಕೈಯಿಂದ ನೂಲಿದ ಮತ್ತು ಕೈಯಿಂದ ನೇಯ್ದ ಬಟ್ಟೆಯನ್ನು ಮಾತ್ರ ರಾಷ್ಟ್ರದ್ವಜಕ್ಕಾಗಿ ಬಳಸಲಾಗುತ್ತದೆ.

ಪ್ಲ್ಯಾಸ್ಟೀಕ ದ್ವಜವನ್ನು ಅವತ್ತೊಂದು(?) ದಿನ ಹಿಡಿದು “ಬೋಲೋ ಭಾರತಮಾತಾ ಕೀ ಜೈ” ಎಂದು ಕೂಗುವ ನಮಗೆ ರಾಷ್ಟ್ರದ್ವಜಕ್ಕೂ ಒಂದು ನೀತಿ/ನಿಯಮಾವಳಿ ಇರುವುದು ಗೋತ್ತಿರಲಾರದ್ದು ಅಮೇರಿಕದ ರಾಷ್ಟ್ರಾದ್ಯಕ್ಷರು ನೋಣ ಕೊಂದ ವಿಷಯಕ್ಕಿಂತ ದೊಡ್ಡದಲ್ಲ ಬಿಡಿ.

ಮಾಹೀತಿ ಕೃಪೆ: ದಿ ಹಿಂದೂ

6 Responses to “ನಿಮಗಿದು ಗೋತ್ತೆ, ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು”


  1. 1 ಸುನಾಥ June 19, 2009 at 11:19 am

    ಶೆಟ್ಟರ,
    ಹುಬ್ಬಳ್ಳಿ ಹತ್ತರಿರೋ ಬೆಂಗೇರಿಯೊಳಗೊ ಅಥವಾ ಧಾರವಾಡದ ಹತ್ತರಿರೊ ಮುಗದದಲ್ಲಿಯೋ ಸಹ ಧ್ವಜನಿರ್ಮಾಣ ಆಗ್ತದ ಅಂತ ಎಲ್ಲೋ ಓದಿದ ನೆನಪು.

  2. 2 ಶೆಟ್ಟರು (Shettaru) June 19, 2009 at 11:35 am

    ಹೌದ್ರಿ ಕಾಕಾ,

    ಮುಗದದಾಗ ಧ್ಹ್ವಜ ತಯಾರಾಗೂದು ನಾನೂ ಕೇಳಿನ್ರಿ.

    ಪ್ರೀತಿಯಿರಲಿ
    ಶೆಟ್ಟರು

  3. 3 Sangaraj June 20, 2009 at 10:55 am

    Olleya Mahiti

  4. 4 prasad June 23, 2009 at 6:50 pm

    nija kanri shetre namma deshada bagge namma hirime bagge namma janarige chinte madoke samaya ellide heli?

  5. 5 ಶೆಟ್ಟರು (Shettaru) July 6, 2009 at 3:04 pm

    ಸಂಗರಾಜ ಮತ್ತು ಪ್ರಸಾದ್,

    ಧನ್ಯವಾದಗಳು

    -ಶೆಟ್ಟರು

  6. 6 gururaj August 14, 2009 at 5:33 pm

    keli baal khushi aat nodri…..


Leave a Reply




a

Blog Stats

  • 8,401 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು