Archive for July, 2009

ಜೊತೆಯಾಗಿ……?

ಜೋತೆಯಾಗಿ......?ಜೊತೆಯಲ್ಲಿಯೇ ಸಾಗುತ್ತಿದ್ದೆವೆ
ಎಂದು ನಂಬಿ
ಮನದ ಭಾವನೆಗಳನ್ನು
ಮಾತಾಗಿಸಿ ನೆಡೆಯುತ್ತಿದ್ದಾಗ,
ನೀ ಕೈಬಿಟ್ಟು ಹೋದ
ಸುಳಿವೆ ತಿಳಿಯದೆ
ನಗುತ್ತಾ-ಮಾತಾಡುತ್ತಾ ಹಾಗೆಯೆ
ಸ್ವಲ್ಪ ದೂರ ಸಾಗಿದೆ.

ಜನರೆಲ್ಲಾ ಕಲ್ಲು ಬಿಸಿ
ಜೋರಾಗಿ ಚಪ್ಪಾಳೆ ಹಾಕಿ
ನಗುತ್ತಿದ್ದಾಗ,
ತಲೆಯತ್ತಿ, ಕಣ್ಣು ಬಿಟ್ಟು
ಸುತ್ತಲೂ ನೋಡಿದಾಗ
ನಿಜವಾಗಿಯೂ ನೋವಾಯಿತು.

ಜನರು ಬಿಸಿದ ಕಲ್ಲುಗಳಿಂದ
ಆದ ನೋವಿಗಾಗಿ
ಅಲ್ಲ ಗೆಳತಿ, ಆ
ನಗುವವರ ಗುಂಪಿನಲ್ಲಿ
ಸದ್ದಿಲ್ಲದೆ ಕೈ ಬಿಟ್ಟು
ನಗುತ್ತ ನಿಂತ ನಿನ್ನ ಕಂಡು.

It happens only in India.. : ಬಾಂದ್ರಾ-ವರ್ಲಿ ಸಮುದ್ರ ಸೇತುವೆ

It happens only in India

It happens only in India..

ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಉದ್ಗಾಟನೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಅಷ್ಟರಲ್ಲೆ ನಮ್ಮ ಈ ಗೆಳೆಯ ತನ್ನ ಸಂಪ್ರದಾಯದಂತೆಯೂ ಉದ್ಗಾಟಿಸಿಯೆಬಿಟ್ಟ.

ಸುಮಾರು ೧೬೫೦ ಕೋಟಿ ರೂಪಾಯಿಗಳ ಈ ಸೇತುವೆ ಪಾವನವಾಯಿತಲ್ಲ, ಅಷ್ಟೆ ಸಾಕು…!!!!


a

Blog Stats

  • 8,095 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು