ನನ್ನ ಸಧ್ಯದ ಓದು ಮತ್ತು ಈಗಷ್ಟೆ ಮುಗಿದ ಓದು

ಶನಿವಾರದಂದು ಬೆಳಿಗ್ಗೆ ಎಂದಿನಂತೆ ರಜೆ, ಹೋರಗೆ ಹೋಗಲಾರದ ನನ್ನ ಆಲಸಿತನವನ್ನು ಊರಿಂದ ಕೊಂಡೊಯ್ದ ಕನ್ನಡ ಪುಸ್ತಕಗಳ ನಡುವೆ ಕಳೆಯುವ ನನ್ನ ವೀಕೆಂಡ್ ಶುರುವಾಗಿದ್ದು ಎಚ್ ನಾಗವೇಣಿ ಬರೆದ ‘ಗಾಂಧಿ ಬಂದ’ ಪುಸ್ತಕದೊಂದಿಗೆ.

ಸ್ವಾತಂತ್ರ್ಯಪೂರ್ವ ಸಮಯದ ದಕ್ಷಿಣ ಕನ್ನಡದ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಕಥೆ, ಆ ಪ್ರದೇಶದ ಜಾತಿಪದ್ಧತಿ, ಆಚಾರ-ವಿಚಾರಗಳ ಹಾಗೂ ವ್ಯಕ್ತಿ-ವಿಚಾರಗಳನ್ನೊಳಗೊಂಡ ಕಥೆ, ಕಥೆಗೆ ಹೋಸ ಆಯಾಮವಾಗಿ ಮಂಗಳೂರಿಗೆ ಬರುವ ಗಾಂಧಿ, ತಾನು ಪ್ರತಿ ಸಲ ಬಂದಾಗಲೂ ಹೋಸ ಹಂಬಲ, ಹೋಸ ಚಿಂತನೆ, ಹೋಸ ತಲ್ಲಣಗಳನ್ನು ಸೃಷ್ಟಿಸುತ್ತಾರೆ. ಹಲವಾರು ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟು ಕೊಂಡಿರುವ ಈ ಕಾದಂಬರಿಯ ಕೆಂದ್ರ ಕಥೆ ಒಬ್ಬ ಬ್ರಾಹ್ಮನ ವಿಧವೆ ತನ್ನೆಲ್ಲ ಸಂಪ್ರದಾಯಿಕ ಸಂಕೋಲೆಗನ್ನು ದಾಟಿ ತನ್ನನ್ನು ಪ್ರೀತಿಸುವ ಬ್ಯಾರಿ ಮುಸ್ಲಿಮನನ್ನು ಸೇರುವ ಕಥೆ. ಅದಕ್ಕೆ ಪೂರಕವಾಗಿ ಹಲವಾರು ಕಥೆಗಳು ಇಂತಹ ಮತ್ತೊಂದು ಎಳೆಯೆ ಗಾಂಧಿ ಮಂಗಳೂರಿಗೆ ಬಂದದ್ದು.

ಕಥೆಗಿಂತ ನನ್ನನ್ನು ಸೇಳೆದದ್ದು ನಾಗವೇಣಿಯವರು ಓದುಗರಿಗೆ ಪಾತ್ರಗಳೊಂದಿಗೆ ಕಟ್ಟಿಕೊಡುವ ಅನುಬಂದ, ಓದಿ ಮುಗಿಸಿ ೨-೩ ದಿನಗಳಾದರೂ ಅಲ್ಲಿನ ಪಾತ್ರಗಳಾದ ಅಂತಪ್ಪ, ಐತು, ಮಾರಪ್ಪ, ಪಾಂಡು ಶೆಟ್ಟರು, ಕುಸುಮೊಯಿಲಿ ಇತ್ಯಾದಿಗಳು ನನ್ನೊಡನೆ ಇಷ್ಟೊತ್ತಿನವರೆಗೂ ಇಲ್ಲೆ ಇದ್ದರು, ಈಗಷ್ಟೆ ಎಲ್ಲೊ ಹೋಗಿದ್ದಾರೆ ಇನ್ನೇನು ಬರುತ್ತಾರೆ ಎನ್ನುವ ಭಾವ ನನ್ನಲ್ಲಿನ್ನೂ ಉಳಿದಿದೆ.

ಐತಿಹಾಸಿಕ ಘಟನೆಯನ್ನು ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ತುಂಬ ಕಡಿಮೆ, ಆ ಕಡಿಮೆಯಲ್ಲೆ ಅದು ಯಶಸ್ವಿಯಾಗುವುದು ಮತ್ತೂ ಕಡಿಮೆ. ಆದರೆ ಇಲ್ಲಿ ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಇಲ್ಲಿ ಗೆದ್ದಿವೆ. ಓದಿಟ್ಟ ಮೇಲೆ ನಮ್ಮನ್ನು ಮತ್ತೆ ಮತ್ತೆ ಕಾಡುವ ಮತ್ತು ನಮ್ಮನ್ನು ಸುಪ್ತಯೋಚನೆಗೆ ತಳ್ಳುವ ಪುಸ್ತಕ “ಗಾಂಧಿ ಬಂದ”, ಎಚ್ ನಾಗವೇಣಿಯವರಿಗೆ ಅಭಿನಂದನೆಗಳು.

Gandhi Banda
ಗಾಂಧಿಯೊಂದಿಗೆ ಮಂಗಳೂರು ಸೇರಿ ಕಳೆದುಹೋಗುತ್ತಿದ್ದ ನನಗೆ ಕೈಗೆ ಸಿಕ್ಕಿದ್ದು ಬಲ್ಲಾಳರ “ಮುಂಬಯಿ ದಿನಾಂಕ”, ಓದುತ್ತಾ ಹೋದಂತೆ ನನ್ನ ಮುಂಬಯಿಯ ಮೊದಲ ದಿನಗಳು ನೆನಪಾದವು, So ಮತ್ತೆ ಮುಂಬಯಿಗೆ ಮರಳಿ ಬಂದಿದ್ದೇನೆ.

ದೀಪದಿಂದ ದೀಪ ಹಚ್ಚಿ ದೀಪಾವಳಿ ɷɷɷɷɷ

Deepavali

ದಸರಾ ಹಬ್ಬ: ನಾನು, ನೀವು ಮತ್ತು ನಮ್ಮೂರು

ಸುಮಾರು ನಾಲ್ಕು ವರುಷಗಳ ನಂತರ ಊರಲ್ಲಿ ದಸರೆ ಆಚರಿಸುವ ಸಂಬ್ರಮದಲ್ಲಿದ್ದೆ, ಸತತ ಮೂರು ದಿನಗಳ ರಜೆ, ಮತ್ತು ನನ್ನ ಬಾಸ್ ಕೊಡುತ್ತೆನೆಂದು ಹೇಳಿದ್ದ ಮತ್ತೊಂದು ದಿನದ ರಜ ಕಾರಣವಾಗಿತ್ತು. ಇವತ್ತು ರಾತ್ರಿಗೆ ಬಸ್ಸಿನಲ್ಲಿ ಸೀಟು ಕಾದಿರಿಸಿದ್ದೂ ಆಗಿತ್ತು. ಊರಿಗೆ ಹೋದವನು ಹಾಗೆಯೇ ಬಂದರಾದಿತೇ ಅವಳನ್ನು ಭೇಟ್ಟಿಯಾಗುವ ಆಸೆ ಮನಸ್ಸಿನಲ್ಲಿ ಮಂಡಿಗೆ ತಿಂದಿದ್ದು ಆಗಿತ್ತು.

ವಿಜಯದಶಮಿಯಂದು ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಬನ್ನಿ ಮಂಟಪಕ್ಕೆ ಹೋಗಿ ಪೂಜಿಸಿ “ಬಂಗಾರ” ಮನೆಗೊಯ್ಯುದು, ಮನೆಯಲ್ಲಿ ಹಬ್ಬದೂಟ ಗೋದಿ ಹುಗ್ಗಿ, ಹೋಳಿಗೆ, ಕರಗಡಬು ಇತ್ಯಾದಿ… ಛೇ..ಛೇ ಎನೆಲ್ಲಾ ಪ್ಲಾನ್ ಮಾಡಿದ್ದೆ, ಕೋನೆಯ ಕ್ಷಣದಲ್ಲಿ ಎಲ್ಲಾ ಠುಸ್sss…

ಕೋನೆಯ ಕ್ಷಣದಲ್ಲಿ ಬಂದ ಕೆಲಸವೊಂದು ನನ್ನೂರಿನ ಪ್ರಯಾಣವನ್ನು ಮುಂದಿನ ವಾರಕ್ಕೆ ಮೂಂದುಡುವಲ್ಲಿ ಸಫಲವಾಗಿದೆ, ನಾನು ಕರ್ತವ್ಯದ ಕರೆಗೆ ಬೆಲೆಕೊಟ್ಟು (?) “ಕರ್ಮಣ್ಯೆ ವಾಧಿಕಾರಸ್ಥೇ ಮಾ ಫಲೇಶು ಕದಾಚನ” ಎನ್ನುತ್ತಾ ಕರ್ತವ್ಯದ ಕಡೆ ಮುಖ ಮಾಡಿ ಕುಳಿತಿದ್ದೆನೆ. ಹೋಸದಾಗಿ ಊರಿಗೆ ಹೋಗುವ ಸಂಭ್ರಮ ಮತ್ತು ನಂತರ ಆದ ದುಃಖದ ಮಡುವಿನಲ್ಲಿ ಎನೂ ಹೋಸದು ಬರೆದಿಲ್ಲ. ಹೀಗಾಗಿ ಹೋದ ವರುಷ ದಸರೆಯಲ್ಲಿ ಬರೆದ ಲೇಖನ ನಿಮಗಾಗಿ (ನೀವು ಕಳೆದ ವರ್ಷವೇ ಓದಿದ್ದರೂ, ಓದಿರದಿದ್ದರೂ, ಈಗ ಓದಲಾರೆನೆಂದರೂ…ಯಾಕೆಂದರೆ ಕರ್ಮಣ್ಯೆ…)

ಬನ್ನಿ ತಗೊಂಡು ಬಂಗಾರದಂಗ ಇರೂಣು: ದಸರೆಯಲ್ಲಿ ಊರ ನೆನಪು

ಮತ್ತೊಂದು ವಿಜಯದಶಮಿ ಊರಿಂದ ದೂರ ಅಚರಿಸಬೇಕಾಗಿದೆ, ಸುಮಾರು ೩-೪ ವರ್ಷಗಳಾಯಿತು ದಸರೆಗೆ ಊರಿಗೆ ಹೋಗದೆ. ದಸರಾ ಹಬ್ಬ ಕರ್ನಾಟಕದ ನಾಡಹಬ್ಬವಾಗಿದ್ದರೂ ಆಚರಣೆಯಲ್ಲಿ ಪ್ರದೇಶ ವ್ಯತ್ಯಾಸ ಕಾಣಬಹುದು.

ಉತ್ತರ ಕರ್ನಾಟಕದ ದಸರೆಯ ಆಚರಣೆಯಲ್ಲಿ “ಬನ್ನಿ”ಗೆ ತನ್ನದೆ ಹಿರಿದಾದ ಅರ್ಥವಿದೆ, ದಸರೆಯಲ್ಲಿ “ಬನ್ನಿ” ಕೇವಲ ಪತ್ರೆಯಲ್ಲ, ಅದು “ಬಂಗಾರ” ಹೀಗಾಗಿ ದಸರೆಯ ಹಬ್ಬ ನಮಗಲ್ಲಿ “ಬನ್ನಿ ಹಬ್ಬ”.

“ಬನ್ನಿ ತಗೊಂಡು ಬಂಗಾರದಂಗ ಇರೂಣು”, “ಬಂಗಾರ ತಗೊಂಡು ಬಂಗಾರದಂಗ ಇರೂಣು” ಬರಿ ಮಾತುಗಳಲ್ಲ, ಶತ್ರುಗಳು ಎದುರಾದರೂ ಆವತ್ತು ನಕ್ಕೊತ “ಬನ್ನಿ ತಗೊಂಡು ಬಂಗಾರದಂಗ ಇರೂಣು”, ಇದರಿಂದಾಗಿ ಒಡೆದ, ಮುರುಟಿದ ಮನಸ್ಸುಗಳು ಒಂದಾದ ಸಾಕ್ಷ್ಯಗಳು ಅನೇಕ, ಒಡೆದ ಮನಸ್ಸುಗಳನ್ನು ಒಂದಾಗಿಸುವ, ಮುರಿದ ಸಂಭಂದಗಳನ್ನು ಬೇರೆಸುವ ಈ ಹಬ್ಬ ಒಂದು ರೀತಿಯಲ್ಲಿ “ವಿಜಯದಶಮಿ”ಯೇ ಸರಿ, ಎಕೆಂದರೆ ಕ್ಷಮೆ ಕೇಳಿದವನು ಮತ್ತು ಕ್ಷಮಿಸಿದವನು ಇಬ್ಬರೂ ಗೆದ್ದ ದಿನ, ಹಾಗೆಯೇ ಹೋಸ ಗೆಳೆತನ ಮತ್ತು ಸಂಭಂದಕ್ಕೆ ಮೊದಲದಿನ.

ನವರಾತ್ರಿಯ ಮೊದಲ ದಿನದಿನದಿಂದಲೆ ಪ್ರತಿದಿನ ಬೆಳೆಗ್ಗೆ ಬನ್ನಿ ಮಂಟಪ(ಬನ್ನಿ ಗಿಡ)ಕ್ಕೆ ಹೋಗಿ ಪೂಜಿಸಿ, ಮಂಟಪ ಸುತ್ತು ಹಾಕಿ ಬರುತ್ತಾರೆ, ಮನೆಗಳಲ್ಲಿ ನವಧಾನ್ಯಗಳ ಸಸಿ ನೆಟ್ಟು, ಬಿಂದಿಗೆಯಲ್ಲಿ ನೀರು ತುಂಬಿ ಪೂಜಿಸುತ್ತಾರೆ, ಇದಕ್ಕೆ ಘಟ್ಟ ಹಾಕುವುದು ಎನ್ನುತ್ತಾರೆ, ಈ ಒಂಬತ್ತು ದಿನಗಳು ಪ್ರತಿದಿನವೂ ದೇವಿ ಪಾರಾಯಣ.

ಆಯುಧ ಪೂಜೆ ನನಗೆ ಮೊದಲಿನಿಂದಲೂ ಇಷ್ಟದ ದಿನ ಎಕೆಂದರೆ, ಆವತ್ತು ರೈತರು ತಮ್ಮ ನೇಗಿಲು, ಎತ್ತು, ಚಕ್ಕಡಿ, ಹಾರಿ, ಗುದ್ದಲಿ, ಕುಡುಗೋಲು ಪೂಜಿಸಿದರೆ, ವ್ಯಾಪಾರಸ್ಥರು ತಮ್ಮ ತಕ್ಕಡಿ, ತೂಕದಕಲ್ಲು ಪೂಜಿಸುತ್ತಾರೆ, ಹಾಗೆಯೇ ಮಹಿಳೆಯರು ಮನೆಯಲ್ಲಿರುವ ಕೈ ಹಾರಿ, ಒಳ್ಳು, ಒನಕೆ, ಕುಡುಗೋಲು, ಈಳಿಗೆ ಮನೆ ಪೂಜಿಸುತ್ತಾರೆ, ತಾಯಂದಿರು ಅವುಗಳ ಜೊತೆಗೆಲ್ಲ ನಮ್ಮ ಪಾಟಿ-ಪುಸ್ತಕಗಳನ್ನು ಇಡುತ್ತಿದ್ದರು, (ನನಗೇಕೆ ಖುಶಿಯೆಂದರೆ ಅವಗಳನ್ನೊದುವುದರಿಂದ ಒಂದು ದಿನ ಮುಕ್ತಿ ಸಿಗುತ್ತಿತ್ತಲ್ಲ ಅದಕ್ಕೆ). ನಮ್ಮ ಕಡೆ ಇದಕ್ಕೆ ‘ಖಂಡೆ ಪೂಜೆ’ ಎಂತಲೂ ಕರೆಯುತ್ತಾರೆ, ಇದರೊಂದಿಗೆ ನಂಟಿರುವ ಇನ್ನೊಂದು ನೆನಪೆಂದರೆ ತುಂಬಾ ಸಣ್ಣವರಿದ್ದಾಗ ಬಹುಶ: ಬಾಲವಾಡಿ ಅಥವಾ ೧ನೇ ಅಥವಾ ೨ನೇಯತ್ತಾ ಇದ್ದಾಗ ಪಾಟಿಯ ಮೇಲೆ ಸರಸ್ವತಿಯ ಚಿತ್ರ ಬರೆಯಿಸಿಕೊಂಡು ಶಾಲೆಗೆ ಒಯ್ದು ಅಲ್ಲಿ ಸರಸ್ವತಿ ಪೂಜೆಗೆ ನಮ್ಮ ಪಾಟಿಗಳನ್ನು ಸಾಲಾಗಿ ಗೋಡೆಗೆ ಒರಗಿಸಿ ಪೂಜಿಸುತ್ತಿದ್ದುದು, ನಂತರದ ದಿನಗಳಲ್ಲಿ ಪ್ರೈಮರಿಯಲ್ಲಿದ್ದಾಗ ಸರಸ್ವತಿ ಪೂಜೆಗೆ ಶಾಲೆಯಲ್ಲಿ ಹೆಂಗೆಳೆಯರು ತಂದುಕೊಟ್ಟ ಸೀರೆಗಳಿಂದ ಮಂಟಪ ಕಟ್ಟಿದ್ದು, ಊರ ಹೋರಗಿನ ತೋಟಗಳಿಂದ ಪೂಜೆಗೆ ಹೂವು, ಹಣ್ಣು, ಬಾಳೆಗಿಡ, ಕಬ್ಬಿನ ಗಿಡಗಳನ್ನು ತೋಟದ ಮಾಲಿಕರನ್ನು ಕೇಳಿ, ಕೊಡದಿದ್ದಾಗ ಕದ್ದು ತಂದದ್ದು ಹೀಗೆ ಆಯುಧ ಪೂಜೆಯ ಅನೇಕ ನೆನಪುಗಳು ನನ್ನ ಪ್ರೈಮರಿ ದಿನಗಳದ್ದು, ಹಾಯಸ್ಕೂಲಿಗೆ ಬಂದ ಮೇಲಿಂದ ಆಯುಧಪೂಜೆ ಕೇವಲ ಮನೆಗೆ ಸೀಮಿತವಾಯ್ತು.

ಮರುದಿನ ವಿಜಯದಶಮಿ, ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಬನ್ನಿ ಮಂಟಪಕ್ಕೆ ಹೋಗಿ ಪೂಜಿಸಿ “ಬಂಗಾರ” ಮನೆಗೊಯ್ಯುವುದು, ಆ ದಿನ ಮನೆಯಲ್ಲಿ ಹಬ್ಬದೂಟ ಗೋದಿ ಹುಗ್ಗಿ, ಹೋಳಿಗೆ, ಕರಗಡಬು ಇತ್ಯಾದಿ… (ಅssssss…ಬ್), ಸಂಜೆಗೆ ಮೊದಲು ಊರದೇವರಿಗೆ ಬನ್ನಿ ಮುಡಿಸಿ, ಮನೆಯಲ್ಲಿ ತಂದೆ-ತಾಯಿ-ಹಿರಿಯರಿಗೆಲ್ಲ ಬನ್ನಿ-ಬಂಗಾರ ಕೊಟ್ಟು “ಬಂಗಾರ ತಗೊಂಡು ಬಂಗಾರದಂಗ ಇರೂಣು” ಅನ್ನುವ ಗಿಳಿವಿಂಡು ಕಾರ್ಯಕ್ರಮ ಶುರು. ಗುಂಪುಗಳಲ್ಲಿ ಗೆಳೆಯರೆಲ್ಲ ಮನೆ-ಮನೆಗೆ ಭೇಟಿ ನಿಡುತ್ತಾ  ಬಂಗಾರ ತಗೊ ಕಾಕಾ, ಚಿಗವ್ವ, ದೊಡ್ಡಪ್ಪ, ಮಾಮಾ, ಅಕ್ಕಾ, ತಂಗಿ, ತಮ್ಮಣ್ಣಾ, ಅಜ್ಜಾ, ಅನ್ನುತ್ತಾ, ‘ಜಲ್ದಿ ಹಿಡಿಬೇ ಯಮ್ಮಾ ಗಟ್ಟಿ ಬಂಗಾರ’ ಎನ್ನುತ್ತಾ ಹಿರಿಯರಿಗೆಲ್ಲ ಅಡ್ಡ ಬಿಳುತ್ತಾ, ಆಶಿರ್ವಾದ ಕೇಳಿದ್ದೆ ಕೇಳಿದ್ದು.

ಆ ಹಿರಿಯರ ಆಶಿರ್ವಾದವೇ ಇರಬೇಕು ನಮ್ಮನ್ನೆಲ್ಲ ಇಷ್ಟು ತಣ್ಣಗಿಟ್ಟಿದ್ದು. ಅಂದ ಹಾಗೆ ತಗೋರಿ “ಬನ್ನಿ-ಬಂಗಾರ ತಗೊಂಡು ಬಂಗಾರದಂಗ ಇರೂಣು”

ತಾಳು ನನ್ನವಳು ಬರಲಿ

ನಿನ್ನೆತನಕ ಜೀವದ ಗೆಳತಿ
ಇಂದವಳು ನನ್ನ ಮದುವಣಗಿತ್ತಿ,
ನಿನ್ನೆಯ ಕನಸ, ನಾಳಿನ ಬದುಕ
ಜೋತೆ ನೆಡೆಯುವ ಸಂಗಾತಿ.

~~0~~

ಕಾಡಿಗೆ ಹಚ್ಚಿದ,
ಕಾಡುವ ಕಂಗಳ
ಮಧು ತುಂಬಿದ ಹೂ ನೀ

ಬಿಟ್ಟು ಬಿಡದೆ,
ನಿನ್ನನೆ ಸುತ್ತುವ
ಆಸೆ ತುಂಬಿದ ದುಂಬಿ ನಾ.Test

~~0~~

ನೀಲಾಕಾಶದ ಎಲ್ಲ
ಮೋಡಗಳು ಹನಿಯಾಗುವುದಿಲ್ಲ
ನನ್ನದೆಯ ಎಲ್ಲ
ಪ್ರೀತಿಯೂ ಮಾತಾಗುವುದಿಲ್ಲ,
ಕೆಲವೊಮ್ಮೆ ಬರ-ಮತ್ತೊಮ್ಮೆ ನೆರೆ.

~~0~~

ಮೋಡದ ಸೆರಗಿನ ಹಿಂದೆ
ಕಣ್ಣಾ ಮುಚ್ಚಾಲೆಯಾಡುತ್ತಿದ್ದ
ಸೂರ್ಯನಿಗೆ ನಾ ಹೇಳಿದೆ
‘ತಾಳು ನನ್ನವಳು ಬರಲಿ’

ಅವಳ ನೆನಪು

Testಅವಳ ಪ್ರೀತಿಯ ಬಳ್ಳಿಯ
ಕೊರಳು ಕೊಯ್ದು ಬಂದಾಗಲೂ
ಅವನಿಗೆ ಅಷ್ಟು ನೋವಾಗಿರಲಿಲ್ಲ,

ಇಂದು ಅವಳ ನೆನಪು
ಬೆಂಬಿಡದೆ ಕಾಡುತ್ತಿದೆ
ಅವನ ಒಳಗೊಳಗೆ ಕೋಲ್ಲುತ್ತಿದೆ.

 

ಗೆಳೆಯನೊಬ್ಬನ ಮನಸಿನ ಮಾತುಗಳು

ಪುಗಸಟ್ಟೆ ಸಾಲುಗಳು

ಪುಗಸಟ್ಟೆ 

ಪುಗಸಟ್ಟೆ ಸಾಲುಗಳು

ಬಸವ ಕಾದು ಕುಳಿತಿದ್ದಾನೆ,
ಅಂಬೇಡ್ಕರ ತನಗೂ ಮೀಸಲಾತಿ
ನೀಡಿಯಾನು ಎಂದು.
ಎಕೆಂದರೆ ಬಸವನಿಗೂ
ಇಂದು ಹೊಟ್ಟೆ ಹಸಿವಾಗಿದೆ.

                                   ಬುದ್ಧ-ಬಸವ-ಅಂಬೇಡ್ಕರ
                                   ಜಾತಿ ಪದ್ಧತಿ ಅಳಿಸಲು ಹೋಗಿ,
                                   ಒಂದೊಂದು ಜಾತಿಗೂ ಸೂಚಕವಾಗಿದ್ದು
                                   ಜಾತಿ ಪದ್ಧತಿಯ ಬಹುದೊಡ್ಡ ಗುಣಸೂಚಕ.

ಚಿತ್ರಕೃಪೆ: IGNCA

This can happen only in our Bombay….no where else. Read on…..

Mumbai Local Train 

Only local train passengers in Bombay will know how helpful commuters
try to be……  Last week, a hapless victim fell prey to the over enthusiastic Bombay’s local train commuters.

Our hero, a man from Pune, wanted to go to Matunga, but as luck and Trains would have it, boarded a fast train not halting at his destination. He panicked on realizing his mistake but by then the local had started moving. On seeing his plight, a sympathetic co-passenger decided to come to his rescue.

It seemed that he had been commuting by that particular train (6:03 pm Kasara Fast) for the past 6 years and had noticed that the train always slowed down just before Matunga station and crawled at a snail’s pace while passing through it. He told the man to jump out of the running train as it slowed down and that with a little bit of fleet-footedness, he would make it safely on terra firma. However, knowing the man’s inexperience, he added some words of caution:

“Keep running the moment you jump or you’ll fall. Just keep running.” He stressed the word “running” lest the man not know the laws of motion.
The train did slow down just before Matunga station and at the prompting of His mentor, our hero jumped out of the train and started running as if allHell had broken loose.

What he didn’t realise, of course, was that he was running parallel to the train instead of running away from it. Meanwhile, the train slowed down further, so that the man was running faster than the train. In the process, he reached the door of the next compartment and the footboard commuters there pulled him in thinking he was trying to board the train!

To his agony, the train picked up speed and sped past Matunga and his new
co-passengers started to congratulate him on how lucky he had been, until he told them that they had actually undone what he had done with greatdifficulty.

Those standing at the door of his “ex-compartment” had witnessed the whole drama and just couldn’t stop laughing at the poor man’s situation, while he grinned sheepishly!! !

Ae dil, hai mushkil, jeena yahaan,  
Zara hatke, zara bachke,  
Yeh hai Bombay meri jaan

Sent by a Friend

ಜೊತೆಯಾಗಿ……?

ಜೋತೆಯಾಗಿ......?ಜೊತೆಯಲ್ಲಿಯೇ ಸಾಗುತ್ತಿದ್ದೆವೆ
ಎಂದು ನಂಬಿ
ಮನದ ಭಾವನೆಗಳನ್ನು
ಮಾತಾಗಿಸಿ ನೆಡೆಯುತ್ತಿದ್ದಾಗ,
ನೀ ಕೈಬಿಟ್ಟು ಹೋದ
ಸುಳಿವೆ ತಿಳಿಯದೆ
ನಗುತ್ತಾ-ಮಾತಾಡುತ್ತಾ ಹಾಗೆಯೆ
ಸ್ವಲ್ಪ ದೂರ ಸಾಗಿದೆ.

ಜನರೆಲ್ಲಾ ಕಲ್ಲು ಬಿಸಿ
ಜೋರಾಗಿ ಚಪ್ಪಾಳೆ ಹಾಕಿ
ನಗುತ್ತಿದ್ದಾಗ,
ತಲೆಯತ್ತಿ, ಕಣ್ಣು ಬಿಟ್ಟು
ಸುತ್ತಲೂ ನೋಡಿದಾಗ
ನಿಜವಾಗಿಯೂ ನೋವಾಯಿತು.

ಜನರು ಬಿಸಿದ ಕಲ್ಲುಗಳಿಂದ
ಆದ ನೋವಿಗಾಗಿ
ಅಲ್ಲ ಗೆಳತಿ, ಆ
ನಗುವವರ ಗುಂಪಿನಲ್ಲಿ
ಸದ್ದಿಲ್ಲದೆ ಕೈ ಬಿಟ್ಟು
ನಗುತ್ತ ನಿಂತ ನಿನ್ನ ಕಂಡು.

It happens only in India.. : ಬಾಂದ್ರಾ-ವರ್ಲಿ ಸಮುದ್ರ ಸೇತುವೆ

It happens only in India

It happens only in India..

ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಉದ್ಗಾಟನೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಅಷ್ಟರಲ್ಲೆ ನಮ್ಮ ಈ ಗೆಳೆಯ ತನ್ನ ಸಂಪ್ರದಾಯದಂತೆಯೂ ಉದ್ಗಾಟಿಸಿಯೆಬಿಟ್ಟ.

ಸುಮಾರು ೧೬೫೦ ಕೋಟಿ ರೂಪಾಯಿಗಳ ಈ ಸೇತುವೆ ಪಾವನವಾಯಿತಲ್ಲ, ಅಷ್ಟೆ ಸಾಕು…!!!!

ನಿಮಗಿದು ಗೋತ್ತೆ, ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು

ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು

ಹೌದ್ರಿ, ಭಾರತದಲ್ಲಿ ಎಲ್ಲೆಲ್ಲಿ ಖಾದಿ ರಾಷ್ಟ್ರ ದ್ವಜ ಹಾರಾಡ್ತೈತಿ ಅವು ನಮ್ಮೂರಾಗ ತಯಾರಾಗಿರ್ತಾವು.

ಹುಬ್ಬಳ್ಳಿ-ಧಾರವಾಡದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (Karnataka Khadi Gramodyoga Samyukta Sangha (KKGSS)) ಭಾರತದ ಎಕೈಕ ಸರ್ಕಾರದ ಮಾನ್ಯತೆ ಪಡೆದ ರಾಷ್ಟ್ರ ದ್ವಜ ತಯಾರಿಕಾ ಸಂಸ್ಥೆ. ಅಲ್ಲಿ ತಯಾರಾದ ರಾಷ್ಟ್ರ ದ್ವಜಗಳೆ ಭಾರತದ ಎಲ್ಲಡೆ ಬಾನೆತ್ತರಕ್ಕೆ ಹಾರಾಡುತ್ತವೆ.

ಈ ಹುಬ್ಬಳ್ಳಿಯ ರಾಷ್ಟ್ರ ದ್ವಜ ತಯಾರಿಕಾ ಕೆಂದ್ರಕ್ಕೆ ಸರಬರಾಜಾಗುವ ಬಟ್ಟೆ ತಯಾರಾಗುವುದು ಇದೆ “ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ”ದ ಬಾಗಲಕೋಟೆ ಶಾಖೆಯಲ್ಲಿ. ಅಲ್ಲಿ ಖಾದಿಯ ನೂಲು ತೆಗೆದು, ಅದನ್ನು ಸರಿಯಾಗಿ ನೇಯಲಾಗುತ್ತದೆ. ಮೂಲತವಾಗಿ ಕೇವಲ ಬಿಳಿ ಬಣ್ಣದಲ್ಲಿರುವ ಖಾದಿಯನ್ನು ಸರಿಯಾಗಿ ಮೂರು ಪ್ರಮಾಣದಲ್ಲಿ ವಿಂಗಡಿಸಿ, ಅವುಗಳಲ್ಲಿ ಎರಡು ಲಾಟಗಳನ್ನು ಭಾರತಿಯ ಗುಣಮಾಪನ ಸಂಸ್ಥೆ (Bureau of Indian Standards) ನಿಗದಿಪಡಿಸಿದ ಕರಾರುವಾಕ್ಕಾದ ಕೇಸರಿ ಮತ್ತು ಹಸಿರು ಬಣ್ಣ ಹಾಕಲಾಗುತ್ತದೆ.

ಹಾಗೆ ಮೂರು ಬಣ್ಣಗಳ ಬಟ್ಟೆಗಳನ್ನು ಹುಬ್ಬಳ್ಳಿಗೆ ತಂದು, ನಿಗದಿ ಪಡಿಸಲಾದ ಪ್ರಮಾಣದಲ್ಲಿ ಬಟ್ಟೆ ಕತ್ತರಿಸಿಕೊಳ್ಳುತ್ತಾರೆ, ನಂತರ ಬಿಳಿ ಬಟ್ಟೆಯ ಎರಡೂ ಬದಿಗಳಲ್ಲಿ ಅಶೋಕ ಚಕ್ರವನ್ನು ಮುದ್ರಿಸಿ (ಚಕ್ರವು ಎರಡೂ ಬದಿಗಳಲ್ಲಿ ಸರಿಯಾಗಿ ಒಂದೆ ಜಾಗದಲ್ಲಿ ಮೇಳೈಸಬೇಕು), ಮೂರು ಬಣ್ಣದ ಬಟ್ಟೆಗಳನ್ನು ಸೇರಿಸಿ ಹೋಲೆಯಲಾಗುತ್ತದೆ (ರಾಷ್ಟ್ರದ್ವಜದ ಉದ್ದ ಮತ್ತು ಅಗಲದ ಪರಿಮಾಣ ೨:೩ ಅನುಪಾತದಲ್ಲಿರುತ್ತದೆ). ಇವುಗಳಲ್ಲಿ ಯಾವುದಾದರೂ ತಪ್ಪಾದಲ್ಲಿ ಅದು ಭಾರತದ ರಾಷ್ಟ್ರ ದ್ವಜ ಸಂಹೀತೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ(ಇಂತಹ ನೂರಕ್ಕೂ ಹೆಚ್ಚು ನಿಯಮಗಳು/ಗುಣಮಾಪನಗಳು ರಾಷ್ಟ್ರ ದ್ವಜ ಸಂಹೀತೆಯಲ್ಲಿದೆ).

ಕೋನೆಯ ಹನಿ: ನಮ್ಮಲ್ಲಿ ಎಷ್ಟು ಜನಕ್ಕೆ ಗೋತ್ತು ಕೇವಲ ಕೈಯಿಂದ ನೂಲಿದ ಮತ್ತು ಕೈಯಿಂದ ನೇಯ್ದ ಬಟ್ಟೆಯನ್ನು ಮಾತ್ರ ರಾಷ್ಟ್ರದ್ವಜಕ್ಕಾಗಿ ಬಳಸಲಾಗುತ್ತದೆ.

ಪ್ಲ್ಯಾಸ್ಟೀಕ ದ್ವಜವನ್ನು ಅವತ್ತೊಂದು(?) ದಿನ ಹಿಡಿದು “ಬೋಲೋ ಭಾರತಮಾತಾ ಕೀ ಜೈ” ಎಂದು ಕೂಗುವ ನಮಗೆ ರಾಷ್ಟ್ರದ್ವಜಕ್ಕೂ ಒಂದು ನೀತಿ/ನಿಯಮಾವಳಿ ಇರುವುದು ಗೋತ್ತಿರಲಾರದ್ದು ಅಮೇರಿಕದ ರಾಷ್ಟ್ರಾದ್ಯಕ್ಷರು ನೋಣ ಕೊಂದ ವಿಷಯಕ್ಕಿಂತ ದೊಡ್ಡದಲ್ಲ ಬಿಡಿ.

ಮಾಹೀತಿ ಕೃಪೆ: ದಿ ಹಿಂದೂ

Next Page »


a

Blog Stats

  • 7,990 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು