ಮೊಹರಂ ಅಂದರೆ ಹುಲಿ ವೇಷ, ಅಳ್ಳೊಳ್ಳಿ ಬವ್ವ…

ಮೊಹರಂ ಅಂದರೆ ಹುಲಿ ವೇಷ, ಅಳ್ಳೊಳ್ಳಿ ಬವ್ವಾ, ಮಾದಲಿ, ಚೊಂಗೆ, ಅಲಮ್ ಗಳು, ಅಲ್ಲಾ ದೇವರ ಡೋಲಿಗಳು, ಕತ್ತಲರಾತ್ರಿ, ಮಸೂತಿಗೆ ಹೋಗಿ ಸಕ್ಕರಿ ಹಂಚೂದು, ಮುಲ್ಲಾನ ನವಿಲುಗರಿ ಆಶಿರ್ವಾದ, ಡೋಲಿಗಳು ಕೊನೆಯ ದಿನ ಹೊಳೆಗೆ ಹೋಗುವಾಲ ಹಿಂದು ಮುಸ್ಲಿಮರೆನ್ನದೇ ಎಲ್ಲರೂ ಡೋಲಿಯನ್ನು ಹೋರುವುದು, ಎಲ್ಲ ಮನೆಯವರು ತಮ್ಮ ಮನೆಯ ಮುಂದೆ ಡೋಲಿಗಳು ಬಂದಾಗ ಕಾಲಿಗೆ ನೀರು ಸುರುವಿ, ಉದುಬತ್ತಿ ಕೊಟ್ಟು ನಮಸ್ಕಾರ ಮಾಡುದು, ರಿವಾಯತ್ ಹಾಡುಗಾರರ ಕರ್ಬಲಾ ಹಾಡುಗಳು, ಅಲಾಯಿ ಕುಣಿತ… ಮೊಹರಂ ಅಂದರೆ ಎಷ್ಟೆಲ್ಲ ಆಗಿತ್ತು ನಮ್ಮ ಬಾಲ್ಯದಲ್ಲಿ, ಈಗ ಕೇವಲ ಸರ್ಕಾರಿ ರಜೆಯಾಗಿದೆ.

ಕನ್ನಡದ ಕೆಲವು ಕರ್ಬಲಾ ಪದಗಳು ಹೀಗಿವೆ (ನನ್ನ ನೆನಪಿಗೆ ಬಂದ ಹಾಗೆ)…
“ಮೊದಲಿಗೆ ನೆನೆದಿನೋ
ಅಲ್ಲಾನ ನಾನಾ
ಪ್ರತಮಕ ನೆನುವೇನೋ ಶಿವನ ಧ್ಯಾನಾ…”

“ಬಾಗಲಕೋಟಿ ಶಹರಾ, ರಾಜ್ಯಕ್ಕ ಮಿಗಿಲ
ಕೇಸುಪೀರ ದೇವರು ನೆನದಾನಲ್ಲ”

ಎಲ್ಲರಿಗೂ ಮೊಹರಂ ಹಬ್ಬದ ಶುಭಾಶಯಗಳು…

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ…

ನೆಡೆಯಲು ಕನ್ನಡ ನೆಲ,
ಕುಡಿಯಲು ಕನ್ನಡ ಜಲ,
ಹೆಚ್ಚಲಿ ಕನ್ನಡ ಬಲ,
ಪ್ರತಿಷ್ಠೆ ಬಿಡಿ, ಕನ್ನಡ ಮಾತಾಡಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..

ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಹೆಸರಾಗಿದೆ ಕರ್ನಾಟಕ, ಉಸಿರಾಗಲಿ ಕನ್ನಡ..
– ಅಮೋಘವರ್ಷ. ಈ. ಶೆಟ್ಟರ.

ದೀಪದಿಂದ ದೀಪ ಹಚ್ಚಿ ದೀಪಾವಳಿ….

ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.

ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು

ರಾಮನೂ ನೀನೇ, ರಹೀಮನೂ ನೀನೇ

ರಾಮನೂ ನೀನೇ, ರಹೀಮನೂ ನೀನೇ,
ಈ ಜಗದೋಡೆಯನೂ ನೀನೇ
ನೀನಗೇತಕೋ ಸ್ವಂತದಾ ಮನೆ?

ಮಸೀದಿ ಕೆಡವಿದರೂ ನೀ ಸಾಯಲಿಲ್ಲ,
ಮಂದಿರ ಕಟ್ಟಿಸಿದರೂ ನೀನಗೆ ಮರು ಹುಟ್ಟಿಲ್ಲ,
ಎಕೆಂದರೇ ನೀನು ಅದಿ, ಅಂತ್ಯ, ಅನಂತ…

– ರಾಜು ತಾಳೀಕೋಟಿಯ ‘ಕಲಿಯುಗದ ಕುಡುಕ’ ನಾಟಕ ಸಂಭಾಷಣೆ*
(* ನನಗೆ ನೇನಪಿದ್ದಂತೆ)

ಪಂಡಿತ ಪುಟ್ಟರಾಜ ಗವಾಯಿಗಳು ಲಿಂಗೈಕ್ಯ

ಪಂಡಿತ ಪುಟ್ಟರಾಜ ಗವಾಯಿಗಳು 

ಇಂದು ಮಧ್ಯಾನ್ಹ 12-10 ಕ್ಕೆ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಗವಾಯಿಗಳು ಗದಗಿನಲ್ಲಿ ಅಸ್ತಂಗತರಾದರು

ಏಕಾಗ್ರತೆ ಗುಣಮಟ್ಟಕ್ಕೆ ಹೀಗೊಂದು ಉದಾಹರಣೆ

ಏಕಾಗ್ರತೆಯ ಗುಣಮಟ್ಟಕ್ಕೆ ಹೀಗೊಂದು ಉದಾಹರಣೆ

ಟೀಚರ್ (i.e. ಅಕ್ಕೋರು): ರಾಜು, ದೊಡ್ಡವನಾದ ಮೇಲೆ ಎನು ಮಾಡ್ತಿಯಾ?

ರಾಜು: ಮದುವೆ ಮಾಡ್ಕೊತಿನಿ ಮೀಸ್!!!!

ಟೀಚರ್: ಹಾಗಲ್ಲ, ಎನೂ ಆಗ್ತೀಯಾ?

ರಾಜು : ಮದುಮಗ!!!!!

ಟೀಚರ್:ಓಹೋ.. ನೀನು ದೊಡ್ಡವನಾದ ಮೇಲೆ ಏನು ಸಂಪಾದಿಸಬೇಕೆಂದಿರುವೆ?

ರಾಜು : ಹೆಂಡತಿ!!!!

ಟೀಚರ್: ಏ ದಡ್ಡಾ, ನಾನು ಕೇಳ್ತಿರೋದು ದೊಡ್ಡವನಾದ ಮೇಲೆ ತಂದೆ ತಾಯಿಗೊಸ್ಕರ ಏನು ತರ್ತೀಯಾ?

ರಾಜು: ಸೋಸೆ ತರ್ತಿನಿ…!!!!!

ಟೀಚರ್:ಏ ಮುಟ್ಟಾಳ, ನಿನ್ನ ತಾಯ್ತಂದೆ ನಿನ್ನಿಂದ ಏನು ಬಯಸ್ತಾರೆ?

ರಾಜು: ಮೊಮ್ಮಗ!!!!!!!!!!!!!!!!

ಟೀಚರ್: ಅಯ್ಯೋ ದೇವರೇ…ನಿನ್ನ ಜೀವನದ ಗುರಿಯಾದ್ರೂ ಏನು?

ರಾಜು: ನಾವಿಬ್ಬರು, ನಮಗಿಬ್ಬರು!!!!!!!!!!!!

ಉತ್ತರ ಕೇಳಿ ಮೂರ್ಛೆ ಹೋದ ಟೀಚರು ಇನ್ನೂ ಎದ್ದಿಲ್ಲಾ…!!!!!!!!!!!$#*&$#*%^